Home / ಪ್ರಶ್ನೋತ್ತರ

ಪ್ರಶ್ನೋತ್ತರ

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿದಾಗ ಅವರನ್ನು ದಫನ ಮಾಡುವ ವಿಚಾರದಲ್ಲಿ ತಕರಾರು ನಡೆದಿತ್ತು. ಕೆಲವರು ಅವರನ್ನು ಸುಡುಗಾಡಿನಲ್ಲಿ ಸುಡಬೇಕು ಎಂದೆಲ್ಲಾ ಹೇಳಿದರು. ಹೀಗಿರುವಾಗ ಆತ್ಮಹತ್ಯೆಯ ಬಗ್ಗೆ ಇಸ್ಲಾಮಿನ ದೃಷ್ಟಿಕೋನವೇನು? ಉತ್ತರ: ಮನುಷ್ಯನ ಜೀವನ ಹಾಗೂ ಶರೀರವು ದೈವದತ್ತವಾದುದಾಗಿದೆ. ಅದು ಮನುಷ್ಯನು ಸ್ವತಃ ಗಳಿಸಿದ್ದಲ್ಲ. ಆದ್ದರಿಂದ ಅವೆರಡನ್ನೂ ನಾಶಪಡಿಸುವ ಹಕ್ಕು ಮನುಷ್ಯರಿಗಿಲ್ಲ ಎಂಬುದೇ …

Read More »

ಮುಸ್ಲಿಮರು ಭಾರತಕ್ಕೆ ನಿಷ್ಠರಾಗಿಲ್ಲ. ನಿಜವೇ ?

✍️ ಏ.ಕೆ. ಕುಕ್ಕಿಲ ಕೆಲವು ಆರೋಪಗಳಿವೆ. 1. ಮುಸ್ಲಿಮರು ಭಾರತಕ್ಕೆ ನಿಷ್ಠರಾಗಿಲ್ಲ. 2. ಅವರು ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿಲ್ಲ. 3. ಅವರು ಸೌದಿಯಲ್ಲಿರುವ ಕಾಬಾಕ್ಕೆ ಮುಖ ಮಾಡಿ ನಮಾಝ್ ಮಾಡುತ್ತಾರೆ. 4. ಅವರು ವರ್ಷಂಪ್ರತಿ ಸೌದಿ ಅರೇಬಿಯಾದ ಮಕ್ಕಾಕ್ಕೆ ಹೋಗುತ್ತಾರೆ. 5. ಅವರು ಅರೇಬಿಕ್ ಭಾಷೆಯಲ್ಲಿರುವ ಗ್ರಂಥ ಪಠಿಸುತ್ತಾರೆ… ಇತ್ಯಾದಿ ಇತ್ಯಾದಿ. ಅಂದಹಾಗೆ, ಮುಸ್ಲಿಮರ ಆರಾಧನೆ, ಆಚರಣೆ, ಆಹಾರ ಕ್ರಮ, ಗ್ರಂಥ ಭಾಷೆ, ವಸ್ತ್ರ ವಿನ್ಯಾಸ ಇತ್ಯಾದಿಗಳಿಗೂ ದೇಶನಿಷ್ಠೆಗೂ ಸಂಬಂಧವನ್ನು ಕಲ್ಪಿಸುವ …

Read More »

ಮುಸ್ಲಿಮ್ ಮಹಿಳೆ ಹೊರ ಹೋಗಿ ದುಡಿಯಬಾರದೇ?

ಜಾಸಿಮುಲ್ ಮುತವ್ವ  ಮಹಿಳೆಯರು ದುಡಿದು ಸಂಪಾದಿಸುವ ಲೋಕದಲ್ಲಿ ನಾವು ಬದುಕುತ್ತಿದ್ದೇವೆ. ಮಹಿಳೆಯರ ಆರ್ಥಿಕ ಜವಾಬ್ದಾರಿಯ ಕುರಿತು ವಿವಿಧ  ಸಂಶಯಗಳು ನೆಲೆ ನಿಂತಿವೆ. ಆಕೆಯ ಸಂಪಾದನೆಯ ಹಣವನ್ನು ದಾನ ಮಾಡಬೇಕು ಅಥವಾ ಕುಟುಂಬದ ಖರ್ಚು ವೆಚ್ಚ  ಭರಿಸಬೇಕೆಂಬುದೇ ಹೆಚ್ಚಿನ ಚರ್ಚಾ ವಿಷಯವಾಗಿದೆ. ಕುರ್‌ಆನ್, ಪ್ರವಾದಿ ಚರ್ಯೆ ಮತ್ತು ವಿದ್ವಾಂಸರ ಅಭಿಪ್ರಾಯದ ಆಧಾರದಲ್ಲಿ ನಾನು ಇಲ್ಲಿ ಚರ್ಚಿಸಲು ಬಯಸುತ್ತೇನೆ. ಮಹಿಳೆಯರು ಹೊರಹೋಗಿ ದುಡಿಯುವುದರ ಬಗ್ಗೆ ಇಸ್ಲಾಮಿನ ವಿಧಿಯೇನು? ಇದರ ಪರವಾಗಿರುವವರ ಅಭಿಪ್ರಾಯವೇನೆಂದರೆ ಆಕೆ …

Read More »

ಶ್ರೀರಾಮ, ಬುದ್ಧ, ಬಸವಣ್ಣರಂತೆ ಪ್ರವಾದಿಯ(ಸ) ಚಿತ್ರ ಏಕಿಲ್ಲ?

ಏ.ಕೆ. ಕುಕ್ಕಿಲ 1. ನಿಮ್ಮ ಅಲ್ಲಾಹ್ ನೋಡಲು ಹೇಗಿದ್ದಾರೆ? ಅವರ ಚಿತ್ರ ಯಾಕಿಲ್ಲ? 2. ಪ್ರವಾದಿ ಮುಹಮ್ಮದರ ಪುತ್ಥಳಿಯಾಗಲಿ ಆಕೃತಿ ರಚನೆಯಾಗಲಿ ಯಾಕೆ ಎಲ್ಲೂ ಕಾಣಿಸುತ್ತಿಲ್ಲ? ಇಸ್ಲಾಮ್‌ನಲ್ಲಿ ಅದಕ್ಕೆ ನಿಷೇಧ ಇದೆಯೇ? ಪ್ರಶ್ನೆ ಅಸಾಧುವಲ್ಲ. ಶಿವನಿಂದ ಹಿಡಿದು ಗಣಪತಿಯವರೆಗೆ, ಶ್ರೀಕೃಷ್ಣನಿಂದ ಹಿಡಿದು ಶ್ರೀರಾಮನವರೆಗೆ, ಸರಸ್ವತಿಯಿಂದ ಹಿಡಿದು ದುರ್ಗಾ ಪರಮೇಶ್ವರಿಯವರೆಗೆ, ಮೇರಿಯಿಂದ ಹಿಡಿದು ಯೇಸುವಿನ ವರೆಗೆ ಮತ್ತು ಮಹಾವೀರ, ಬುದ್ಧ, ಬಸವ, ಗುರುನಾನಕ್, ಸಾಯಿಬಾಬಾ, ಅರಿಸ್ಟಾಟಲ್, ಆರ್ಕಿಮಿಡೀಸ್, ಅಲೆಕ್ಸಾಂಡರ್, ಬಾಬರ್, ಟಿಪ್ಪುಸುಲ್ತಾನ್, …

Read More »

ಆಹಾರ ಸೇವನೆ: ಕುರ್‌ಆನ್, ಹದೀಸ್ ಏನು ಹೇಳುತ್ತದೆ?

✍️ಇಬ್ರಾಹೀಮ್ ಶಮ್ನಾಡ್ ನಮ್ಮ ಆರೋಗ್ಯದ ಸ್ಥಿರತೆಯನ್ನು ಕಾಪಾಡಲು ಆಹಾರದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂಬ ಬಗ್ಗೆ ಎಲ್ಲರಿಗೂ ತಿಳಿದಿದ್ದರೂ ಅದನ್ನು ಹೇಗೆ ಪಾಲಿಸಬೇಕೆಂಬ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಎಲ್ಲಾ ವಿಚಾರಗಳ ಬಗ್ಗೆಯೂ ಬಹಳ ಸ್ಪಷ್ಟವಾದ ಮಾರ್ಗದರ್ಶನ ನೀಡುವ ಇಸ್ಲಾಮ್ ಆಹಾರದ ಸೇವಿಸುವ ವಿಚಾರದ ಬಗ್ಗೆಯೂ ಕುರ್‌ಆನ್ ನಿಂದ ಮತ್ತು ಬುಖಾರಿ, ತಿರ್ಮಿದಿ, ಇಬ್ನು ಮಾಜಾ ಮುಂತಾದವರ ಆಧಾರ ಪ್ರಮಾಣಗಳಿರುವ ಹದೀಸ್ ಗ್ರಂಥಗಳಿಂದ ಆಯ್ದ ಹತ್ತು ಮಾರ್ಗದರ್ಶನಗಳನ್ನು ಇಲ್ಲಿ ನೀಡುತ್ತೇನೆ. …

Read More »

ಲೈಂಗಿಕ ಅತೃಪ್ತಿಯ ಮಹಿಳೆಯರಿಗೆ ಬಹುಪತಿತ್ವದ ಅವಕಾಶ ನೀಡಬಹುದಲ್ಲವೇ?

ಇಸ್ಲಾಮಿನಲ್ಲಿ ಪುರುಷರಿಗೆ ಬಹುಪತ್ನಿತ್ವ ಅವಕಾಶ ನೀಡಿದಂತೆ ಲೈಂಗಿಕವಾಗಿ ಅಸಂತೃಪ್ತಿ ಹೊಂದಿರುವ ಮಹಿಳೆಯರಿಗೆ ಒಂದಕ್ಕಿಂತ ಹೆಚ್ಚು ಪತಿಯನ್ನು ಹೊಂದಲು ಇಸ್ಲಾಮ್‌ನಲ್ಲಿ ಯಾಕೆ ಅವಕಾಶವಿಲ್ಲ ಎಂದು ಇಸ್ಲಾಮನ್ನು ಮಹಿಳಾ ಶೋಷಣೆಯ ಧರ್ಮ ಎಂದು ಎತ್ತಿ  ಕಟ್ಟುವವರು ಆರೋಪಿಸಿ ಪ್ರಶ್ನಿಸುತ್ತಾರೆ. ಬಹುಪತ್ನಿತ್ವಕ್ಕೆ ಅವ ಕಾಶ ನೀಡಿದ ಇಸ್ಲಾಮ್ ಬಹುಪತಿತ್ವಕ್ಕೆ ಯಾಕೆ ಅವಕಾಶ ನೀಡಿಲ್ಲ ಎಂಬುದು  ಅವರ ಪ್ರಶ್ನೆಯಾಗಿದೆ. ಬಹುಪತ್ನಿತ್ವ ಹಲವು ಸಮಸ್ಯೆಗಳಿಗೆ ಪರಿಹಾರವಾಗಿದೆ. ಆದರೆ ಬಹುಪತಿತ್ವ ಒಂದು ಸಮಸ್ಯೆ ಮಾತ್ರವಾಗಿದೆ. ಬಹುಪತ್ನಿತ್ವ ಹೊಂದಲು  ಪುರುಷರನ್ನು …

Read More »

ಮುಹಮ್ಮದ್(ಸ) ರ ನಂತರವೇ ಇಸ್ಲಾಮ್ ಧರ್ಮದ ಚರ್ಚಿಸಲ್ಪಟ್ಟಿದೆ. ಹಾಗಾದರೆ ಮುಹಮ್ಮದ್ ರ ಅಜ್ಜ, ತಂದೆಯ ಧರ್ಮ ಯಾವುದು?

ಪ್ರಶ್ನೆ: ಮುಹಮ್ಮದ್(ಸ) ರ ನಂತರವೇ ಇಸ್ಲಾಮ್ ಧರ್ಮದ ವಿಷಯಗಳು ಚರ್ಚಿಸಲ್ಪಟ್ಟಿದೆ. ಕಾಬಾದಲ್ಲಿ  ಮೊದಲೇ ವಿಗ್ರಹಗಳಿದ್ದಾಗ ಮುಹಮ್ಮದರ ಅಜ್ಜ, ತಂದೆ ಅವರ ಧರ್ಮ ಯಾವುದು ಎಂಬ ಬಗ್ಗೆ ಕೆಲವರಲ್ಲಿ ಪ್ರಶ್ನೆ ಮೂಡಿದೆ. ಉತ್ತರಿಸಬಹುದೇ?  ಪ್ರಥಮ ಮಾನವ, ಪ್ರಥಮ ಪ್ರವಾದಿ ಆದಮ್(ಅ)ರ ಬಳಿಕ ಭೂಮುಖದ ಪ್ರಥಮ ಐತಿಹಾಸಿಕ ಜನಾಂಗ ನೂಹರ ಜನಾಂಗವಾಗಿತ್ತು. ಮಹಾ ಪುರುಷರನ್ನು, ಸಜ್ಜನರನ್ನು ದೇವರ ಸ್ಥಾನಕ್ಕೇರಿಸಿ ಪ್ರತಿಮೆಗಳನ್ನು ಸ್ಥಾಪಿಸಿದ ಮೊದಲ ಜನಾಂಗ ನೂಹರ ಜನಾಂಗ. ಸಮಾಜದಲ್ಲಿ ಅತಿಕ್ರಮವನ್ನು ಅನುಸರಿಸಿದ ಈ …

Read More »

ಮೃತರಿಗೆ ಪುಣ್ಯ ತಲುಪುವುದೆ?

ಪ್ರಶ್ನೆ: ನನ್ನ ಈ ಪ್ರಶ್ನೆಗೆ ಕುರ್‌ಆನ್-ಹದೀಸ್‌ನ ಬೆಳಕಿನಲ್ಲಿ ಉತ್ತರಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ಕುರ್‌ಆನ್  ಓದಿ, ಅದರ ಪುಣ್ಯ ಮೃತರಿಗೆ ಸಿಗಲೆಂದು ಪ್ರಾರ್ಥಿಸಬಹುದೇ? ಹಾಗೆ ಪ್ರಾರ್ಥಿಸಿದರೆ ಅದರ ಪುಣ್ಯ ಅವರಿಗೆ ಸಿಗುವುದೇ? ಬಡವರಿಗೆ ಅಥವಾ ಕುಟುಂಬ ಮಿತ್ರಾದಿಗಳಿಗೆ ಊಟಕೊಟ್ಟು ಅದರ ಪುಣ್ಯ ಮೃತರಿಗೆ ಸಿಗಲೆಂದು ಪ್ರಾರ್ಥಿಸಿದರೆ ಅದು ಅವರಿಗೆ ಸಿಗುವುದೇ? ಹಣ ಅಥವಾ ಬಟ್ಟೆ ದಾನ ನೀಡಿ ಅದರ ಪುಣ್ಯವನ್ನು ಮೃತರಿಗೆ ಸಿಗಲೆಂದು ಪ್ರಾರ್ಥಿಸಿದರೆ ಅವರಿಗೆ ಅದರ ಪುಣ್ಯ ಸಿಗುವುದೇ? ಉತ್ತರ: ಈ …

Read More »

ಪಾಪ ಮತ್ತು ತೌಬಾ?

ಪ್ರಶ್ನೆ: ನನ್ನಿಂದ ತಪ್ಪುಗಳು ಸಂಭವಿಸುತ್ತವೆ. ನಾನು ಅಲ್ಲಾಹನಲ್ಲಿ ಕ್ಷಮೆ ಯಾಚಿಸಿ ಮುಂದೆ ತಪ್ಪುಗಳಾಗಬಾರದೆಂದು ದೃಢ ನಿಶ್ಚಯ ಮಾಡುತ್ತೇನೆ. ಆದರೆ ಅದು ಕೆಲವೇ ದಿನಗಳ ಮಟ್ಟಿಗೆ ಇರುತ್ತದೆ. ಪುನಃ ಪಾಪಗಳನ್ನು ಮಾಡಿ ಬಿಡುತ್ತೇನೆ. ಪಾಪ ಮಾಡಿದ ನಂತರ ಪುನಃ ತೌಬಾ ಮಾಡುತ್ತೇನೆ. ಆದರೆ ಅನಂತರವೂ ಪದೇ ಪದೇ ಈ ರೀತಿ ಸಂಭವಿಸುತ್ತಿರುತ್ತದೆ. ಪಾಪಗಳನ್ನು ಮಾಡದೆ ತಕ್ವಾದಲ್ಲಿ ಸ್ಥಿರವಾಗಿರಲು ನಾನೇನು ಮಾಡಬೇಕು? ಒಮ್ಮೆ ತೌಬಾ ಮಾಡಿದ ನಂತರ ಪುನಃ ತಪ್ಪು ಮಾಡಿದರೆ ಹಿಂದಿನ …

Read More »

ಪ್ರಶ್ನೆ: ಶೈತಾನ್ ಇದೆ ಅನ್ನೋದಕ್ಕೆ ವೈಜ್ಞಾನಿಕ ಆಧಾರವಿಲ್ಲವೆಂದು ಹೇಳಲಾಗುತ್ತದೆ. ಇದು ಸರಿಯೇ?

ಪ್ರಶ್ನೆ: ಶೈತಾನ್ ಇದೆ ಅನ್ನೋದಕ್ಕೆ ವೈಜ್ಞಾನಿಕ ಆಧಾರವಿಲ್ಲವೆಂದು ಹೇಳಲಾಗುತ್ತದೆ. ಈ ಕುರಿತು ವಿವರಿಸಬಹುದೇ? ಉತ್ತರ: ಶೈತಾನ್ ಇದೆ ಅನ್ನೋದಕ್ಕೆ ವೈಜ್ಞಾನಿಕ ಆಧಾರ ಇಲ್ಲ ಎಂದು ಹೇಳುವವರಿಗೆ, ವಿಜ್ಞಾನ ಅಂದರೆ ವಿಶೇಷ ಜ್ಞಾನ ಎಂದಾಗಿದೆ. ಈ ಜ್ಞಾನದ ಬೆಳಕಿನಲ್ಲಿ ಶೋಧನೆ ಮಾಡುವುದಕ್ಕೆ ವೈಜ್ಞಾನಿಕ ಶೋಧನೆ ಎನ್ನಲಾಗುತ್ತದೆ. ಕೆಲವರಿಗೆ ಇದು ಮಹಾ ಜ್ಞಾನ ಆಗಿ ಕಂಡರೂ ವಾಸ್ತವದಲ್ಲಿ ಇದು ಅಲ್ಪ ಜ್ಞಾನ ಆಗಿದೆ ಎಂದು ಕೆಲವರಿಗೆ ತಿಳಿಯಲು ಸಾಧ್ಯವಾಗಿಲ್ಲ. ಕಾರಣ ವಿಜ್ಞಾನಕ್ಕಿಂತ ಮಿಗಿಲಾದ …

Read More »