ಸಾರ್ವಜನಿಕ ಸ್ಥಳಗಳಲ್ಲಿ ನಮಾಝ್ ಮಾಡುವುದರಿಂದ ದೂರ ನಿಲ್ಲುವಂತೆ ಮುಸ್ಲಿಮರಿಗೆ ಕರೆ ಕೊಟ್ಟಿರುವ ನದ್ವತುಲ್ ಉಲಮ ಸಂಸ್ಥೆಯು ಮಹಿಳೆಯರು ಮಸೀದಿಗೆ ತೆರಳಿ ನಮಾಝ್ ಮಾಡುವುದಕ್ಕೆ ಇಸ್ಲಾಂನಲ್ಲಿ ಅವಕಾಶ ಇದ್ದು ಇದರಂತೆ ಮಹಿಳೆಯರು ನಡಕೊಳ್ಳುವುದಕ್ಕೆ ಸ್ವತಂತ್ರರು ಎಂದು ಹೇಳಿದೆ. ದೇಶದಾದ್ಯಂತದ ಇಸ್ಲಾಮಿಕ್ ವಿದ್ವಾಂಸರು ಮತ್ತು ಚಿಂತಕರು ಲಕ್ನೋದ ನದ್ವತುಲ್ ಉಲಮದಲ್ಲಿ ಸಭೆ ಸೇರಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮೌಲಾನಾ ಸೈಯದ್ ಅಬುಲ್ ಹಸನ್ ಅಲಿ ನದ್ವಿ ಅವರು 1963 ರಲ್ಲಿ ಈ ಸಂಸ್ಥೆಯನ್ನು …
Read More »ಹಲಾಲ್ ಉತ್ಪನ್ನಕ್ಕೆ ನಿಷೇಧ, ಯುಪಿ ಆಡಳಿತದ ನಿರ್ಧಾರ ಮೂರ್ಖತನದ್ದು: ಜಮಾಅತೆ ಇಸ್ಲಾಮೀ ಹಿಂದ್
ಹಲಾಲ್ ಸರ್ಟಿಫಿಕೇಟ್ ಇರುವ ಉತ್ಪನ್ನಗಳಿಗೆ ನಿಷೇಧ ವಿಧಿಸುವ ಉತ್ತರ ಪ್ರದೇಶ ಸರಕಾರದ ನಿರ್ಧಾರವು ಮೂರ್ಖತನದ್ದು ಮತ್ತು ಅತ್ಯಂತ ಹಾಸ್ಯಾಸ್ಪದವಾದುದು ಎಂದು ಜಮಾಅತೆ ಇಸ್ಲಾಮಿ ಹಿಂದ್ ಉಪಾಧ್ಯಕ್ಷ ಪ್ರೊಫೆಸರ್ ಮೊಹಮ್ಮದ್ ಸಲೀಂ ಇಂಜಿನಿಯರ್ ಹೇಳಿದ್ದಾರೆ. ಉತ್ತರ ಪ್ರದೇಶ ಸರಕಾರವು ನವೆಂಬರ್ 18ರಂದು ಈ ಆದೇಶವನ್ನು ಹೊರಡಿಸಿದ್ದು ಇದರ ಪ್ರಕಾರ ಹಲಾಲ್ ಸರ್ಟಿಫಿಕೇಟ್ ಇರುವ ಉತ್ಪನ್ನಗಳನ್ನು ತಯಾರಿಸುವ ಅವನ್ನು ಕಾಪಿಡುವ ಮಾರಾಟ ಮಾಡುವ ಮತ್ತು ಖರೀದಿಸುವುದಕ್ಕೆ ನಿಷೇಧ ಹೇರಲಾಗಿದೆ. ಆದರೆ ರಫ್ತು ಮಾಡುವುದಕ್ಕೆ …
Read More »ಅಝಾನ್ನಿಂದ ಶಬ್ದ ಮಾಲಿನ್ಯವಾಗುವುದಿಲ್ಲ; ಬಜರಂಗದಳ ನಾಯಕನ ಅರ್ಜಿ ವಜಾಗೊಳಿಸಿದ ಗುಜರಾತ್ ಹೈಕೋರ್ಟ್
ಮಸೀದಿಗಳಲ್ಲಿ ಅಝಾನ್ಗೆ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸುವಂತೆ ಕೋರಿ ಬಜರಂಗದಳದ ನಾಯಕ ಶಕ್ತಿಸಿಂಹ ಝಾಲಾ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದ್ದು, ಮನವಿಯನ್ನು ಸಂಪೂರ್ಣವಾಗಿ ತಪ್ಪುಕಲ್ಪನೆ ಎಂದು ಹೇಳಿದೆ. ಧ್ವನಿವರ್ಧಕಗಳ ಮೂಲಕ ಅಝಾನ್ ಕೊಡುವುದರಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ. ಇದು ಜನರ ವಿಶೇಷವಾಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅರ್ಜಿದಾರ ಬಜರಂಗದಳದ ನಾಯಕ ಕೋರ್ಟ್ನಲ್ಲಿ ವಾದಿಸಿದ್ದರು. ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಅನಿರುದ್ಧ ಪಿ …
Read More »ಉತ್ತರಕಾಶಿಯ ಸುರಂಗದಿಂದ 41 ಕಾರ್ಮಿಕರನ್ನು ರಕ್ಷಿಸಿದ ವಕೀಲ್ ಹಸನ್ ರ ಮಾತು ಈಗ ಭಾರೀ ವೈರಲ್
ಉತ್ತರಾಖಂಡದ ಸುರಂಗದಲ್ಲಿ ಸಿಲುಕಿಕೊಂಡಿದ್ದ 41 ಮಂದಿಯನ್ನು ಭೂಮಿಗೆ ಕನ್ನ ಕೊರೆದು ಬದುಕಿಸಿದ ದೆಹಲಿ ಕಾರ್ಮಿಕ ತಂಡದ ನಾಯಕ ವಕೀಲ್ ಹಸನ್ ಅವರು ದಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ನೀಡಿದ ಸಂದರ್ಶನ ಭಾವುಕವಾಗಿದೆ ಮತ್ತು ಭಾರಿ ಪ್ರಚಾರವನ್ನು ಪಡೆದಿದೆ. ಈ ದೇಶದವರಾದ ನಾವು ಸೌಹಾರ್ದತೆಯಿಂದ ಬದುಕಬೇಕಾಗಿದೆ ಎಂದವರು ಹೇಳಿದ್ದಾರೆ. ನಮ್ಮ ತಂಡದಲ್ಲಿ ಹಿಂದೂಗಳೂ ಇದ್ದಾರೆ ಮುಸ್ಲಿಮರೂ ಇದ್ದಾರೆ. ಸುರಂಗದೊಳಗೆ ಸಿಲುಕಿಕೊಂಡಿದ್ದ 41 ಮಂದಿ ಕಾರ್ಮಿಕರನ್ನು ರಕ್ಷಿಸುವುದಕ್ಕಾಗಿ ನಾವು ಕಠಿಣ ಪ್ರಯತ್ನ …
Read More »ಸಿದ್ದೀಕ್ ಜಕ್ರಿಬೆಟ್ಟು ಬರೆದ ಸುಮಧುರ ದಾಂಪತ್ಯ ಕೃತಿ ಬಿಡುಗಡೆ
ಮಂಗಳೂರು: ” ಸಮಾಜದ ಕುಟುಂಬದ ಸಮಸ್ಯೆಗಳನ್ನು ಬಹಳ ಯಥಾವತ್ತಾಗಿ ಈ ಕೃತಿಯಲ್ಲಿ ತಿಳಿಸಲಾಗಿದೆ. ಇಸ್ಲಾಮಿನಲ್ಲಿ ಮದುವೆಯು ಸರಳ ವಿಧಾನವಾಗಿದೆ. ಮದುವೆಯ ಪ್ರಾರಂಭದಿಂದ ಹಿಡಿದು ಹನಿಮೂನ್ ಸಹಿತ ಎಲ್ಲಾ ವಿಚಾರಗಳು ಈ ಕೃತಿಯಲ್ಲಿ ಅಡಕವಾಗಿವೆ. ದಾಂಪತ್ಯ ಬದುಕಿನ ಆಗು ಹೋಗುಗಳ ಬಗೆಗಿನ ಈ ವಿಮರ್ಶಾತ್ಮಕ ಕೃತಿ ಪ್ರತಿಯೊಂದು ಮನೆಗೂ ಪ್ರಯೋಜನಕಾರಿಯಾಗಲಿದೆ ಎಂದು ಫಾರ್ವರ್ಡ್ ಕೌನ್ಸಿಲಿಂಗ್ ಟ್ರಸ್ಟ್ ಮಂಗಳೂರು ಇದರ ಅಧ್ಯಕ್ಷರಾದ ರಹ್ಮತ್ ಮನ್ಸೂರ್ ಹೇಳಿದರು. ಅವರು ಇಲ್ಲಿನ ಫಾರ್ವರ್ಡ್ ಕೌನ್ಸಿಲಿಂಗ್ ಕಚೇರಿಯಲ್ಲಿ …
Read More »ಹಿಜಾಬ್ ಧರಿಸಿದ ಮಹಿಳೆಯರ ಸಂಭ್ರಮದ ಸ್ಮರಣೆಗೆ ಇಂಗ್ಲೆಂಡಿನಲ್ಲಿ ‘ಸ್ಟೆಂತ್ ಆಫ್ ದಿ ಹಿಜಾಬ್ ಪ್ರತಿಮೆ!
ಸೆಥ್ವಿಕ್, ಇಂಗ್ಲೆಂಡ್: ಹಿಜಾಬ್ ಧರಿಸುವ ಮಹಿಳೆಯರ ಸಂಭ್ರಮವನ್ನು ಜಾಗತಿಕವಾಗಿ ನೆನಪಿನಲ್ಲುಳಿಯುವಂತೆ ಮಾಡಲು ಸೆಥ್ವಿಕ್ನ ಬೀದಿಯಲ್ಲಿ ಈ ವರ್ಷದ ಕೊನೆಯಲ್ಲಿ ‘ಹಿಜಾಬ್ನ ಶಕ್ತಿ’ ಶೀರ್ಷಿಕೆಯ ವಿಶಿಷ್ಟವಾದ ಶಿಲ್ಪಕಲೆ ಸಿದ್ಧವಾಗಿದೆ. ಈ ಸ್ಮಾರಕ ಕಲಾಕೃತಿಯು ವಿಶ್ವದಲ್ಲೇ ಇದು ಮೊದಲನೆಯದು ಎನ್ನಲಾಗಿದೆ. ಹಿಜಾಬ್ ಧರಿಸುವ ಮಹಿಳೆಯರಿಗೆ ಗೌರವ ಸಲ್ಲಿಸುವುದು ಮಾತ್ರವಲ್ಲದೇ ಅವರ ಉಡುಗೆಯನ್ನು ಪರಿಗಣಿಸದೇ ಪ್ರೀತಿಸುವ ಮತ್ತು ಗೌರವಿಸುವ ಅವರ ಹಕ್ಕನ್ನು ಈ ಪ್ರತಿಮೆ ಸಂಕೇತಿಸುತ್ತದೆ. ‘ಹಿಜಾಬ್ನ ಶಕ್ತಿ’ ಪ್ರತಿಮೆ ಐದು ಮೀಟರ್ ಎತ್ತರವನ್ನು …
Read More »ಮಕ್ಕಾ: ಕುರ್ಆನ್ ಸ್ಪರ್ಧೆಯಲ್ಲಿ 117 ರಾಷ್ಟ್ರಗಳು ಭಾಗಿ
ಮಕ್ಕಾದಲ್ಲಿ 43ನೇ ಅಂತಾರಾಷ್ಟ್ರೀಯ ಕುರ್ಆನ್ ಸ್ಪರ್ಧೆ ಆರಂಭವಾಗಿದೆ. ಭಾರತ ಸೇರಿದಂತೆ 117 ರಾಷ್ಟ್ರಗಳಿಂದ ಸ್ಪರ್ಧಾಳುಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಎಂಟು ಕೋಟಿ 90 ಲಕ್ಷ ರೂಪಾಯಿ ಮೊತ್ತದ ಬಹುಮಾನವನ್ನು ಸ್ಪರ್ಧೆಯಲ್ಲಿ ವಿತರಣೆ ಮಾಡಲಾಗುವುದು ಎಂದು ಸೌದಿ ಇಸ್ಲಾಮಿಕ್ ವ್ಯವಹಾರ ಸಚಿವಾಲಯ ತಿಳಿಸಿದೆ. ಈ ಸ್ಪರ್ಧೆ ಮಸ್ಜಿದುಲ್ ಹರಾಂನಲ್ಲಿ ನಡೆಯುತ್ತಿದೆ. 11 ದಿನಗಳ ಕಾಲ ನಡೆಯುವ ಫೈನಲ್ ರೌಂಡ್ ಸ್ಪರ್ಧೆಯು ಈಗಾಗಲೇ ಆರಂಭವಾಗಿದೆ. ಒಟ್ಟು 166 ಮಂದಿ ಇದರಲ್ಲಿ ಭಾಗಿಯಾಗಿದ್ದಾರೆ. ಆನ್ಲೈನ್ ಮೂಲಕ …
Read More »ಮಕ್ಕಾಕ್ಕೆ ತೆರಳಿ ಉಮ್ರಾ ನಿರ್ವಹಿಸಿ ಮರಳಿದ ನಟಿ ರಾಕಿ ಸಾವಂತ್ ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ
ಮಕ್ಕಾಕ್ಕೆ ತೆರಳಿ ಉಮ್ರಾ ನಿರ್ವಹಿಸಿ ಮರಳಿದ ನಟಿ ರಾಕಿ ಸಾವಂತ್ ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ಲಭಿಸಿದೆ. ಇಸ್ಲಾಂ ಸ್ವೀಕರಿಸಿದ ಬಳಿಕ ತನ್ನ ಹೆಸರನ್ನು ಫಾತಿಮಾ ಎಂದು ಬದಲಿಸಿಕೊಂಡಿರುವ ರಾಕಿ ಸಾವಾಂತ್ ಇದೀಗ ಮಕ್ಕ ಮತ್ತು ಮದೀನಾಕ್ಕೆ ತೆರಳಿ ಧಾರ್ಮಿಕ ಕಾರ್ಯಗಳನ್ನು ನಿರ್ವಹಿಸಿ ಮರಳಿದ್ದಾರೆ. ರಾಕಿ ಸಾವಂತ್ ಅವರ ಉಮ್ರಾ ಯಾತ್ರೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಗಮನ ಸೆಳೆದಿತ್ತು. ಇದೇ ವೇಳೆ ಉಮ್ರಾ ಯಾತ್ರೆಯ ವಿವಿಧ ಚಿತ್ರ …
Read More »ಮುಸ್ಲಿಮರು ಇನ್ನು ಆತಂಕ ಪಡಬೇಕಾಗಿಲ್ಲ, ಅಝಾನ್ ಗೆ ಅನುಮತಿಬೇಕಿಲ್ಲ: ನ್ಯೂ ಯಾರ್ಕ್ ಮೇಯರ್ ಹೊಸ ಗೈಡ್ ಲೈನ್ಸ್
ನ್ಯೂಯಾರ್ಕ್ ನಗರದಲ್ಲಿ ಇನ್ನು ಮುಂದೆ ಸಾರ್ವಜನಿಕವಾಗಿ ಅಝಾನ್ ಅಥವಾ ಬಾಂಗ್ ಕೊಡಲು ಪರ್ಮಿಷನ್ ಪಡೆದುಕೊಳ್ಳಬೇಕಾದ ಅಗತ್ಯ ಇಲ್ಲ. ನ್ಯೂಯಾರ್ಕ್ ನಗರದ ಮೇಯರ್ ಏರಿಕ್ ಆದಮ್ ಅವರು ಹೊಸ ಗೈಡ್ ಲೈನ್ ಅನ್ನು ಬಿಡುಗಡೆಗೊಳಿಸಿದ್ದು ಅದರಲ್ಲಿ ಈ ವಿವರ ನೀಡಲಾಗಿದೆ. ಮುಸ್ಲಿಮರು ಆತಂಕದಿಂದ ಬದುಕ ಬೇಕಿಲ್ಲ. ಶುಕ್ರವಾರ ಮತ್ತು ರಮಝಾನ್ ನ ಸಂಜೆಯ ವೇಳೆ ತಮ್ಮ ಅಝಾನ್ ಕರೆಯನ್ನು ಕೊಡುವುದಕ್ಕೆ ಅವರು ಮುಕ್ತರಾಗಿದ್ದಾರೆ. ಆದರೆ ನಿಗದಿತ ಡೆಸಿಬಿಲ್ ನಲ್ಲಿ ಈ ಅಝಾನ್ …
Read More »ನೆದರ್ಲ್ಯಾಂಡ್ ನಲ್ಲಿ ಮತ್ತೆ ಕುರ್ ಆನ್ ಗೆ ಅವಮಾನ: ಟರ್ಕಿ ರಾಯಭಾರ ಕಚೇರಿಯ ಎದುರು ಕುರ್ ಆನ್ ಹರಿದು ಹಾಕಿದ್ರು
ನೆದರ್ಲ್ಯಾಂಡ್ ನಲ್ಲಿ ಕುರ್ ಆನ್ ನ ವಿರುದ್ಧ ಮತ್ತೆ ಪ್ರತಿಭಟನೆ ನಡೆದಿದ್ದು ತುರ್ಕಿ ರಾಯಭಾರ ಕಚೇರಿಯ ಮುಂದೆ ವ್ಯಕ್ತಿಯೋರ್ವ ಕುರಾನ್ ಅನ್ನು ಹರಿದು ಹಾಕಿರುವ ಘಟನೆ ನಡೆದಿದೆ. ಬಲಪಂಥೀಯ ಗುಂಪಿನ ನೇತೃತ್ವ ವಹಿಸಿರುವ ಎಡ್ವಿನ್ ಎಂಬಾತ ಈ ಕೃತ್ಯ ಎಸೆಗಿದ್ದು ಈತನಿಗೆ ಇಬ್ಬರು ಸಾತ್ ನೀಡಿದ್ದಾರೆ . ನೆದರ್ ಲ್ಯಾಂಡ್ ಸರಕಾರ ಇಂತಹ ಪ್ರತಿಭಟನೆಯನ್ನು ಖಂಡಿಸಿದೆಯಾದರೂ ಇದನ್ನು ತಡೆಯುವುದಕ್ಕೆ ಕಾನೂನಾತ್ಮಕವಾಗಿ ಯಾವುದೇ ಶಕ್ತಿ ತನಗೆ ಇಲ್ಲ ಎಂದು ಹೇಳಿದೆ. ಇದೇ …
Read More »