ಅನುವಾದ: ಝೈದ್ ಬಿನ್ ಸಾಬಿತ್ ಹೇಳುತ್ತಾರೆ, ನಾನು ಅಲ್ಲಾಹನ ಪ್ರವಾದಿ(ಸ) ಹೀಗೆ ಹೇಳುವುದನ್ನು ಕೇಳಿದ್ದೇನೆ : ಯಾವ ವ್ಯಕ್ತಿ ಲೋಕವನ್ನು ತನ್ನ ಜೀವನದ ಪರಮೋದ್ದೇಶವನ್ನಾಗಿ ಮಾಡುತ್ತಾನೆ, ಅಲ್ಲಾಹನು ಅವನ ಹೃದಯದ ಶಾಂತಿ ಮತ್ತು ಸಂತೃಪ್ತಿಯನ್ನು ಕಸಿದುಕೊಳ್ಳುತ್ತಾನೆ ಮತ್ತು ಅವನು ಯಾವಾಗಲೂ ಸಂಪತ್ತನ್ನು ಸಂಗ್ರಹಿಸುವ ದುರಾಶೆ ಮತ್ತು ಅಗತ್ಯದಲ್ಲಿ ಮುಳುಗಿರುತ್ತಾನೆ. ಆದರೆ ಅಲ್ಲಾಹನು ಅವನಿಗೆ ನಿಗದಿಪಡಿಸಿದ ಭಾಗವನ್ನು ಮಾತ್ರ ಅವನು ಪಡೆಯುತ್ತಾನೆ. ಮತ್ತು ಯಾರ ಜೀವನದ ಪರಮೋದ್ದೇಶ ಪರಲೋಕ ಆಗಿರುವುದು ಅಲ್ಲಾಹನು ಅವರ ಹೃದಯದಲ್ಲಿ ಶಾಂತಿ ಮತ್ತು ಸಂತೃಪ್ತಿಯನ್ನು ಸುರಿಸುತ್ತಾನೆ ಮತ್ತು ಸಂಪತ್ತಿನ ದುರಾಶೆಯಿಂದ ಅವರ ಹೃದಯನ್ನು ರಕ್ಷಿಸುತ್ತಾನೆ ಮತ್ತು ಲೋಕದಲ್ಲಿ ಅವರಿಗೆ ನಿಗದಿ ಪಡಿಸಲಾದ ಭಾಗ ಖಂಡಿತ ಅವರಿಗೆ ಸಿಕ್ಕೇ ಸಿಗುತ್ತದೆ.
[ಅಲ್-ತರ್ಘೀಬ್ ವಾ ಅಲ್-ತರ್ಹೀಬ್]
Check Also
ಪ್ರಾಥ೯ನೆ, ಸತ್ಕಮ೯
ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು …