Home / ವಾರ್ತೆಗಳು (page 34)

ವಾರ್ತೆಗಳು

2.5 ಲಕ್ಷ ರೂಪಾಯಿ ಮೌಲ್ಯದ ಬ್ಯಾಗನ್ನು ಹಿಂದಿರುಗಿಸಿದ ಬೆಂಗಳೂರಿನ ಈ ನಿಸ್ವಾರ್ಥ ಕ್ಯಾಬ್ ಚಾಲಕ

ಬೆಂಗಳೂರು ; ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ ಜನರು ಒಂದಲ್ಲ ಒಂದು ರೀತಿಯಲ್ಲಿ ಕೆಲವೊಮ್ಮೆ ತಮ್ಮ ವಸ್ತುಗಳನ್ನು ಕಳೆದುಕೊಳ್ಳುತ್ತಾರೆ. ಕೆಲವೊಮ್ಮೆ ಕಳ್ಳತನವಾದರೆ, ಇನ್ನು ಕೆಲವೊಮ್ಮೆ ವಾಹನದಲ್ಲಿ ಮರೆತು ಬಿಟ್ಟು ಹೋಗುತ್ತಾರೆ. ಇಂತಹ ವಸ್ತುಗಳು ಮತ್ತೆ ಸಿಗುತ್ತದೆ ಎಂಬ ಭರವಸೆ ಹೆಚ್ಚಿನವರಿಗಿರುವುದಿಲ್ಲ. ಆದರೆ ಎಲ್ಲರೂ ಕೆಟ್ಟವರಾಗಿರುವುದಿಲ್ಲ. ಕೆಲವರು ಇತರರ ಸೊತ್ತುಗಳನ್ನು ಜೋಪಾನವಾಗಿಟ್ಟು ಅವರಿಗೆ ಮರಳಿಸುತ್ತಾರೆ. ಅಂತಹ ಓರ್ವ ಕ್ಯಾಬ್ ಡ್ರೈವರ್ ಸಾಮಾಜಿಕ ಜಾಲ ತಾಣದಲ್ಲಿ ಎಲ್ಲರ ಮನ ಗೆದ್ದಿದ್ದಾರೆ. ಸಯೂಜ್ ರವೀಂದ್ರನ್ ಎಂಬವರು …

Read More »

ಅತೀ ಉದ್ದದ ಕುರ್‌ಆನ್ ಬರೆಯುವ ಮೂಲಕ ಗಿನ್ನಿಸ್ ದಾಖಲೆಗೆ ಮುಂದಾಗಿದ್ದಾರೆ ದಿಲೀಪ್

ಒಂದು ಕಿಲೋ ಮೀಟರ್ ಉದ್ದದ ಕ್ಯಾನ್ವಾಸ್‌ನಲ್ಲಿ ಕೈಬರಹದ ಕುರ್‌ಆನ್ ತಯಾರಿಸುವ ಮೂಲಕ ತನ್ನ ಹೆಸರಿನಲ್ಲಿ ಗಿನ್ನೆಸ್ ವಿಶ್ವ ದಾಖಲೆ ಬರೆಯುವ ಕನಸನ್ನು ಈಡೇರಿಸುವ ಉದ್ದೇಶದಿಂದ ಕೋಝಿಕ್ಕೋಡ್‌ನ ಮುಕ್ಕೊಮ್ ಮೂಲದ ವ್ಯಂಗ್ಯ ಚಿತ್ರಕಾರ ಎಂ. ದಿಲೀಪ್ ಕಾರ್ಯಪ್ರವೃತ್ತರಾಗಿದ್ದಾರೆ. ಈ ಕಾರ್ಯಾಚರಣೆಯ ಮೊದಲ ಹಂತವಾಗಿ ದಿಲೀಪ್ 300 ಮೀಟರ್ ಉದ್ದದ ಕುರ್‌ಆನ್  ಹಸ್ತ ಪ್ರತಿಯನ್ನು ಸಿದ್ಧಪಡಿಸಿದ್ದು, ಇದನ್ನು ಶುಕ್ರವಾರ ಪತ್ರಕರ್ತರ ಸಮ್ಮುಖದಲ್ಲಿ ಸ್ವಾಮಿ ಸಂದೀಪಾನಂದ ಗಿರಿ ಬಿಡುಗಡೆಗೊಳಿಸಿದರು. “ನಾನು ಅತಿ ಹೆಚ್ಚು ಉದ್ದದ …

Read More »

ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥರವರನ್ನು ಜಮಾಅತ್ ರಾಜ್ಯ ತಂಡ ಭೇಟಿ

ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಗೌರವಾನ್ವಿತ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಯವರ ನೇತೃತ್ವದಲ್ಲಿ ಸೌಹಾರ್ದ ಭೇಟಿ ಮಾಡಲಾಯಿತು. ಸ್ವಾಮೀಜಿಯವರೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ಧರ್ಮ, ಅಧ್ಯಾತ್ಮ, ಸೌಹಾರ್ದತೆಯ ವಿಷಯದಲ್ಲಿ ವಿಚಾರ ವಿನಿಮಯ ನಡೆಸಲಾಯಿತು. ಕರ್ನಾಟಕ ಧಾರ್ಮಿಕ ಸೌಹಾರ್ದ ವೇದಿಕೆ ಕಾರ್ಯ ಚಟುವಟಿಕೆಗಳ ಬಗ್ಗೆ ಮತ್ತು ಅದನ್ನು ಬಲಪಡಿಸುವ ಬಗ್ಗೆ ಸ್ವಾಮೀಜಿಯವರು ಸಹಮತ ವ್ಯಕ್ತಪಡಿಸಿ ಈ ಭೇಟಿಯ …

Read More »

ಬಸವತತ್ವ ಮತ್ತು ಇಸ್ಲಾಮ್ ಪುಸ್ತಕ ಬಿಡುಗಡೆ

ಶ್ರೀ ಸಿದ್ಧ ಬಸವ ಕಬೀರ ಸ್ವಾಮೀಜಿಯವರು ಇಂದು ಎಸ್.ಐ.ಓ ಕರ್ನಾಟಕ ಹೊರ ತಂದ ಬಸವತತ್ವ ಮತ್ತು ಇಸ್ಲಾಮ್ ಪುಸ್ತಕವನ್ನು ಇಂದು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ನ ನವಾಜ್, ಎಸ್.ಐ.ಓ ಕರ್ನಾಟಕದ ಕಾರ್ಯದರ್ಶಿ ಶಾಫಿ ಅವರು ಉಪಸ್ಥಿತರಿದ್ದರು.

Read More »

ಕುರ್‍ಆನ್ ಮತ್ತು ಆಧುನಿಕ ವಿಜ್ಞಾನ: ಒಂದು ತುಲನಾತ್ಮಕ ಅಧ್ಯಯನ

ನಮ್ಮ ಸಮಾಜ ಬಹಳ ಮುಂದುವರಿದಿದೆ. ವಿಜ್ಞಾನವಂತೂ ದಿನ ಹೋದಂತೆ ಬೆಳೆಯುತ್ತಲೇ ಇದೆ. ಇಂದಿನ ಸಾಕಷ್ಟು ಮಂದಿ ದೇವರು, ಪವಾಡ, ಸ್ವರ್ಗ, ನರಕ ಮೊದಲಾದವುಗಳ ಮೇಲೆ ವಿಶ್ವಾಸವನ್ನಿಡದೆ, ವಿಜ್ಞಾನವೇ ಸರ್ವಸ್ವ ಎಂದು ನಂಬುತ್ತಾರೆ. ಇಂತಹ ಕಾಲದಲ್ಲಿ ನಾವು ಬದುಕುತ್ತಿರುವಾಗ ಒಂದು ಧರ್ಮದ ಬಗ್ಗೆ, ಅದರ ವಿಶೇಷತೆಯ ಬಗ್ಗೆ ವಿವರಿಸಬೇಕಾದರೆ ಆ ಧರ್ಮಗ್ರಂಥದಲ್ಲಿರುವ ವೈಜ್ಞಾನಿಕ ವಿಷಯಗಳು ಇವತ್ತಿನ ವಿಜ್ಞಾನಕ್ಕೆ ಪೂರಕವಾಗಿದೆಯೇ ಎಂಬುದಾಗಿ ಪರಿಶೀಲಿಸಬೇಕಾಗುತ್ತದೆ. ಏಕೆಂದರೆ, ಒಂದು ವೇಳೆ ಆ ಗ್ರಂಥ ನಮ್ಮ ನೈಜ …

Read More »

ನೆರೆಯವರೊಂದಿಗೆ ವರ್ತನೆ ಪ್ರವಾದಿ ಮುಹಮ್ಮದ್ (ಸ) ರ ಮಾತಿನಲ್ಲಿ…

ಪ್ರವಾದಿ ಮುಹಮ್ಮದ್(ಸ) ಹೇಳಿದರು: “ಯಾವ ವ್ಯಕ್ತಿಯ ಉಪಟಳಗಳಿಂದಾಗಿ ಅವನ ನೆರೆಯವನಿಗೆ ಶಾಂತಿ ಭಂಗವಾಗುತ್ತದೋ ಆತ ಮುಸಲ್ಮಾನನಲ್ಲ”, “ಒಬ್ಬನು ಹೊಟ್ಟೆ ತುಂಬಾ ಉಣ್ಣುತ್ತಿದ್ದು, ಅದೇ ವೇಳೆ ಅವನ ನೆರೆಯವನು ಹೊಟ್ಟೆಗಿಲ್ಲದೆ ಉಪವಾಸ ಬಿದ್ದಿದ್ದರೆ ಅವನು ಸತ್ಯವಿಶ್ವಾಸಿಯಲ್ಲ.” – ಪ್ರವಾದಿ ಮುಹಮ್ಮದ್(ಸ) “ನಿಮ್ಮ ಮಕ್ಕಳಿಗಾಗಿ ನೀವು ಹಣ್ಣು ಹಂಪಲು ಏನಾದರೂ ತಂದರೆ ಅದರಲ್ಲಿ ಸ್ವಲ್ಪವನ್ನು ನಿಮ್ಮ ಅಕ್ಕಪಕ್ಕದ ಮನೆಗಳಿಗೂ ಕಳಿಸಿ ಕೊಡಿರಿ. ಹಾಗಲ್ಲದಿದ್ದರೆ ಕನಿಷ್ಠ ಪಕ್ಷ ಹಣ್ಣಿನ ಸಿಪ್ಪೆಗಳನ್ನು ಮನೆಯ ಹೊರಕ್ಕೆ ಎಸೆಯಬೇಡಿರಿ. …

Read More »