ಪ್ರೀತಿ ಮತ್ತು ಸಮಾನತೆಯನ್ನು ಬೋಧಿಸಿದವರು
- ಸ್ವಾಮೀ ವಿವೇಕಾನಂದ
ಪ್ರಸಿದ್ಧ ತತ್ವಜ್ಞಾನಿ, ಆಧುನಿಕ ಭಾರತದ ಪ್ರತಿಪಾದಕ, ರಾಮಕೃಷ್ಣ ಮಠದ ಸ್ಥಾಪಕ
ಅದ್ವೈತ ಸಿದ್ಧಾಂತವನ್ನು ಸ್ವೀಕರಿಸುವಲ್ಲಿ ಮೊದಲಿಗರು ಎಂಬ ಪಟ್ಟ ಹಿಂದುಗಳಿಗೆ ಸಿಕ್ಕಿರಬಹುದು. ಯಾಕೆಂದರೆ ಅವರು ಹೀಬ್ರೂ ಮತ್ತು ಅರಬ್ ಜನಾಂಗಕ್ಕಿಂತ ಅದೆಷ್ಟೋ ಹಳೆಯ ಕಾಲದವರು. ಆದರೆ ಸಂಪೂರ್ಣ ಮನುಕುಲವನ್ನು ಒಂದೇ ಎಂದು ಸಾರಿ, ಅದರಂತೆಯೇ ವ್ಯವಹರಿಸುವಂತೆ ಸೂಚಿಸುವ ಅದ್ವೈತ ಸಿದ್ಧಾಂತವನ್ನು ಸಾರ್ವತ್ರಿಕವಾಗಿ ಕಾರ್ಯರೂಪಕ್ಕೆ ತರಲು ಹಿಂದುಗಳಿಗೆ ಸಾಧ್ಯವಾಗಲಿಲ್ಲ. ನನ್ನ ಅನುಭವದಲ್ಲಿ ಈ ‘ಸಮತ್ವ’ ಭಾವವನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದರೆ, ಅದು ಕೇವಲ ಇಸ್ಲಾಮ್ ಧರ್ಮವಾಗಿದೆ. ಹಾಗಾಗಿ ಪ್ರಾಯೋಗಿಕ ಇಸ್ಲಾಮಿನ ಸಹಕಾರದ ಹೊರತು ಈ ವೇದಾಂತದ ಸಿದ್ಧಾಂತಗಳೆಲ್ಲ, ಅದೆಷ್ಟು ಅದ್ಭುತವೇ ಆಗಿರಲಿ, ಮನುಕುಲಕ್ಕೆ ಯಾವುದೇ ಪ್ರಯೋಜನ ನೀಡುವಂತಹದ್ದಲ್ಲ.
“ಇಸ್ಲಾಮ್” ಜನಸಾಮಾನ್ಯರಿಗಾಗಿ ಬಂದ ಸಂದೇಶವಾಗಿದೆ. ಸಮಾನತೆಯೇ ಅದರ ಮೊಟ್ಟಮೊದಲ ಆದೇಶ. ಪರಸ್ಪರ ಪ್ರೀತಿಯೇ ಈ ಧರ್ಮದ ಒಟ್ಟು ಸಾರ. ಅದರಲ್ಲಿ ಜನಾಂಗೀಯತೆ, ವರ್ಣಭೇದ ಇತ್ಯಾದಿಗಳ ಗೊಂದಲವೇ ಇಲ್ಲ. ಬನ್ನಿ! ಇದರಲ್ಲಿ ಸೇರಿಕೊಳ್ಳಿ! ಪ್ರಯೋಗಿಕತೆಯೇ ಇದರ ಜೀವಾಳ. ಇದರ ಸಂದೇಶವು ಬಹಳ ಸರಳ – ಬರಿ ಶೂನ್ಯದಿಂದ ಭೂಮ್ಯಾಕಾಶವನ್ನು ಸೃಷ್ಟಿಸಿದ ಆ ಏಕದೇವನ ಮೇಲೆ ವಿಶ್ವಾಸವಿಡಿ. ಸಂಶಯದ ಸುಳಿಯಲ್ಲಿ ಬೀಳಬೇಡಿ”
– Complete Works of Swami Vivekananda