“ನಾಲ್ಕು ವಿಷಯಗಳ ಬಗ್ಗೆ ವಿಚಾರಣೆಗೊಳಪಡುವ ತನಕ ಯಾವ ಮನುಷ್ಯನೂ ಪುನರುತ್ಥಾನದ ದಿವಸದಂದು ಮುಂದೆ ಸಾಗಲಾರ
ಅವನ ಆಯುಷ್ಯದ ಕುರಿತು ಅದನ್ನು ಅವನು ಯಾವ ಕೆಲಸದಲ್ಲಿ ಕೊನೆಗೊಳಿಸಿದನೆಂದು.
ಅವನ ಕರ್ಮದ ಕುರಿತು, ಅವನು ಏನು ಕರ್ಮ ಮಾಡಿದನೆಂದು
ಮತ್ತು ಅವನ ಸಂಪತ್ತಿನ ಕುರಿತು, ಅದನ್ನು ಅವನು ಎಲ್ಲಿಂದ ಸಂಪಾದಿಸಿದ, ಎಲ್ಲಿ ಅದನ್ನು ವ್ಯಯಿಸಿದನೆಂದು.
ಮತ್ತು ಅವನ ಶರೀರದ ಕುರಿತು – ಅದನ್ನು ಅವನು ಯಾವ ಕೆಲಸದಲ್ಲಿ ಸವೆಯಿಸಿದನೆಂದು.” (ಅಬೂ ಬರ್ದಾ(ರ)-ತಿರ್ಮಿದಿ)