ಅಸೂಯೆಯಿಂದ ದೂರವಿರಿ. ಏಕೆಂದರೆ ಬೆಂಕಿಯು ಕಟ್ಟಿಗೆಯನ್ನು ನುಂಗುವಂತೆ ಅಸೂಯೆಯು ಒಳಿತುಗಳನ್ನು ನುಂಗಿ ಬಿಡುತ್ತದೆ. -ಪ್ರವಾದಿ ಮುಹಮ್ಮದ್(ಸ)
ಅನಸ್(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ನನ್ನಲ್ಲಿ ಹೇಳಿದರು – ಓ ನನ್ನ ಮಗನೇ! ನಿನಗೆ ಸಾಧ್ಯವಾದರೆ ನೀನು ನಿನ್ನ ಮನದಲ್ಲಿ ಯಾರ ಬಗ್ಗೆಯೂ ಅಸೂಯೆಯಿಲ್ಲದ ಸ್ಥಿತಿಯಲ್ಲಿ ಬೆಳಗ್ಗೆ ಮತ್ತು ಸಂಜೆ ಮಾಡು. ಅನಂತರ ಹೇಳಿದರು ಓ ನನ್ನ ಮಗನೇ! ಇದು ನನ್ನ ಮಾದರಿ ಆಗಿದೆ. ಯಾರು ನನ್ನ ಮಾದರಿಯನ್ನು ಪ್ರೀತಿಸುತ್ತಾನೋ ಅವನು ನನ್ನನ್ನು ಪ್ರೀತಿಸಿದನು. ಮತ್ತು ಯಾರು ನನ್ನನ್ನು ಪ್ರೀತಿಸುತ್ತಾನೋ ಅವನು ಸ್ವಗ೯ದಲ್ಲಿ ನನ್ನ ಜೊತೆಗಿರುವನು. (ತಿಮಿ೯ದಿ)