ಅನುವಾದ : ಅಬು ಹುರೈರಾ (ರ) ವರದಿ ಮಾಡಿದ್ದಾರೆ, ಅಲ್ಲಾಹನ ಪ್ರವಾದಿ(ಸ )ಹೇಳಿದರು, ತೀರ್ಪಿನ (ನಿರ್ಣಾಯಕ) ದಿನದಂದು ಮನುಷ್ಯರನ್ನು ಅವರ ಉದ್ದೇಶಕ್ಕನುಗುಣವಾಗಿ ಎದ್ದೇಳಿಸಲಾಗುವುದು. [ಅಲ್-ತರ್ಘೀಬ್ ವಾ ಅಲ್-ತರ್ಹೀಬ್: ಇಬ್ನೆ ಮಾಜಾ)
ವಿವರಣಾ ಟಿಪ್ಪಣಿ: ತೀರ್ಪಿನ ದಿನದಂದು, ಅಲ್ಲಾಹನು ಮನುಷ್ಯರ ಬಾಹ್ಯವನ್ನು ಪರಿಗಣಿಸುವುದಿಲ್ಲ, ಬದಲಾಗಿ ಅವರ ಎಲ್ಲಾ ಒಳ್ಳೆಯ ಕಾರ್ಯಗಳಿಗೆ ಅವರ ಉದ್ದೇಶ ಏನಾಗಿತ್ತು ಎಂಬುದನ್ನು ಪರಿಗಣಿಸಲಾಗುತ್ತದೆ. ಕರ್ಮಗಳ ವಿಷಯದಲ್ಲಿ ಅವನ ಹೃದಯದ ಒಲವು ಏನಾಗಿತ್ತು ಮತ್ತು ಅದರ ಆಧಾರದಲ್ಲಿ ಅವನ ಕರ್ಮಗಳ ಸ್ವೀಕಾರ ಅಥವಾ ತಿರಸ್ಕಾರ ನಡೆಯುವುದು.