ಹೊಸದಿಲ್ಲಿ, ಅ.28: ಇಂಡಿಯ ಟಿವಿ ನ್ಯೂಸ್ ಡಾಟ್ ಕಾಮ್ ಸಾಕ್ಷಿ ಮಹಾರಾಜ್ ಸುಪ್ರೀಂಕೋರ್ಟಿಗೆ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ವರದಿ ಮಾಡಿದೆ. 150 ವರ್ಷಗಳಷ್ಟು ಹಳೆಯ ಪ್ರಕರಣ ನಲ್ವತ್ತು ದಿವಸಗಳ ನಿರಂತರ ವಿಚಾರಣೆಯ ಬಳಿಕ ತೀರ್ಪು ಬರಲಿದೆ ಎಂದು ಅವರು ಹೇಳಿದರು.
ಪತ್ರಕರ್ತರೊಂದಿಗೆ ಮಾತಾಡುತ್ತಿದ್ದ ಅವರು ಪುರಾತತ್ವ ವಿಭಾಗ ಪುರಾವೆ ನೀಡಿದೆ. ಶಿಯ ವಕ್ಫ್ ಬೋರ್ಡು ಮಂದಿರ ಕಟ್ಟಿ ಎಂದು ಬರೆದು ಕೊಟ್ಟಿದೆ. ಸುನ್ನಿ ವಕ್ಫ್ ಬೋರ್ಡು ಕೂಡ ಮಂದಿರದ ಪರವಿದೆ. ಹೀಗಾಗಿ ಬಹಳ ಬೇಗನೆ ಮಂದಿರ ನಿರ್ಮಾಣ ಆರಂಭವಾಗಲಿದೆ. ಮಂದಿರದ ಪರ ಸುಪ್ರೀಂಕೋರ್ಟಿನ ತೀರ್ಪು ಬರಲಿದೆ. ಮುಂದಿನ ಡಿಸೆಂಬರ್ ಆರರ ಮೊದಲು ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಸಾಕ್ಷಿ ಹೇಳಿದರು.
ಒಂದು ವೇಳೆ ರಾಮ ಮಂದಿರ ಪರ ತೀರ್ಪು ನ್ಯಾಯಾಲಯದಿಂದ ಬರದಿದ್ದರೆ ಯಾವ ಯೋಜನೆ ರೂಪಿಸಿದ್ದೀರಿ ಎಂದು ಕೇಳಿದಾಗ, ನಾನು ಸಾಕ್ಷಿಯಾಗಿದ್ದೇನೆ. ಹಾಗೆ ಹೀಗೆ ಎಂಬುದಿಲ್ಲ. ಯಾವ ತೀರ್ಪು ಬರುತ್ತದೆ ಎಂಬ ಕುರಿತು ತನಗೆ ಮಾಹಿತಿ ಇದೆ. ಆದ್ದರಿಂದ ಹೇಳುತ್ತೇನೆ. ಡಿಸೆಂಬರ್ ಆರರ ಮೊದಲು ಮಂದಿರ ಕಟ್ಟುವ ಕೆಲಸ ಆರಂಭವಾಗಲಿದೆ.