ಹೈದರಾಬಾದ್: ಛತ್ರಪತಿ ಶಿವಾಜಿ ಮಹಾರಾಜ್ ಅವರ ಜನ್ಮ ದಿನಾಚರಣೆಗೆ ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲೀಮೀನ್ (ಎಐಐಎಂ) ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದರಾದ ಅಸಾಸುದ್ದೀನ್ ಓವೈಸಿ ಗೌರವ ಸಲ್ಲಿಸಿದ್ದಾರೆ.
ತನ್ನ ಟ್ವಿಟ್ಟರ್ ಖಾತೆಯಲ್ಲಿ, 17 ನೇ ಶತಮಾನದ ಮರಾಠ ರಾಜ ಬೆಳ್ಳಿಯ ಚಮಚದೊಂದಿಗೆ ಜನಿಸಿಲ್ಲ. ಅವರು ತನ್ನ ಆಳ್ವಿಕೆಯ ಉದ್ದಕ್ಕೂ ಅವನು ದುರ್ಬಲರ ಪರವಾಗಿದ್ದರು.
“ದೌಲತ್ ಖಾನ್ ಶಿವಾಜಿ ಆಳ್ವಿಕೆಯಲ್ಲಿ ನೌಕಾಪಡೆಯ ಒಂದು ಭಾಗದ ಉಸ್ತುವಾರಿಯಾಗಿದ್ದರು. ಶಿವಾಜಿಯನ್ನು ಬೆಂಬಲಿಸಿ ಹೋರಾಡಿದವರು ಸಿದ್ಧಿ ಹಿಲಾಲ್ . ಸೂತ್ರಿ ಎಂದು ಕರೆಯಲ್ಪಡುವ ಯಾಕೂಬ್ ಬಾಬಾ ಅವರನ್ನು ಛತ್ರಪತಿ ಮೆಚ್ಚುತ್ತಿದ್ದರು ಎಂದು ಅವರು ಹೇಳಿದರು.
ಬಲಪಂಥೀಯರನ್ನು ಗುರಿಯಾಗಿಸಿಕೊಂಡು ಮಾತಾಡುತ್ತಾ, “ಶಿವಾಜಿ ದಲಿತರಿಗೆ ಹತ್ತಿರವಾಗಿದ್ದರು. ಆದರೆ, ಈಗ ಶಿವಾಜಿಯ ಅನುಯಾಯಿ ಎಂದು ಹೇಳಿಕೊಳ್ಳುವ ವ್ಯಕ್ತಿಗಳು ಮಹಾರಾಷ್ಟ್ರದಲ್ಲಿ ದಲಿತ ಮೇಲೆ ನಡೆದ ದೌರ್ಜನ್ಯವನ್ನು ಮರೆಮಾಚುತ್ತಿದ್ದಾರೆ” ಎಂದು ಹೇಳಿದರು. ಮಹಾರಾಷ್ಟ್ರದಲ್ಲಿ ಎಐಎಂಐಎಂನಲ್ಲಿ ಇಬ್ಬರು ಶಾಸಕರು ಮತ್ತು ಒಬ್ಬ ಸಂಸದರು ಇದ್ದಾರೆ.
#Shivaji was not born with a silver spoon & throughout his rule, he embraced the weakest of the weak. A thousand tributes to 'Kulwadi Bhushan' Chhatrapati Shivaji on the occasion of #ShivajiJayanthi pic.twitter.com/wkqFVTh0NS
— Asaduddin Owaisi (@asadowaisi) February 19, 2021