Home / ವಾರ್ತೆಗಳು / ಜಮಾಅತ್ ನಿಯೋಗದಿಂದ ಸುತ್ತೂರು ಶ್ರೀಗಳ ಭೇಟಿ

ಜಮಾಅತ್ ನಿಯೋಗದಿಂದ ಸುತ್ತೂರು ಶ್ರೀಗಳ ಭೇಟಿ

ಗೌರವಾನ್ವಿತ ಸ್ವಾಮೀಜಿಯವರಾದ ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು, ಸುತ್ತೂರು ಮಠ ಇವರನ್ನು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿಯವರಾದ ಜನಾಬ್ ಮುಹಮ್ಮದ್ ಕುಂಞಯವರ ನೇತೃತ್ವದಲ್ಲಿ ಜಮಾಅತ್ ನಿಯೋಗ ಭೇಟಿ ಮಾಡಿತು.

ಈ ಸಂದರ್ಭದಲ್ಲಿ ಪ್ರಸಕ್ತ ಪರಿಸ್ಥಿತಿ ಮತ್ತು ಸ್ಥಿತಿಗತಿಗಳ ಬಗ್ಗೆ ಸ್ವಾಮೀಜಿಯವರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಪ್ರಸಕ್ತ ಪರಿಸ್ಥಿತಿಯಲ್ಲಿ ನಾವು ಮಾಡಬೇಕಾದ ಕೆಲಸಗಳ ಬಗ್ಗೆ ಬಹಳ ಅರ್ಥಪೂರ್ಣ ವಿಚಾರ ವಿನಿಮಯ ನಡೆಯಿತು.

ಜಮಾಅತ್ ಚಟುವಟಿಕೆಗಳು ಬಗ್ಗೆ ವಿಶೇಷವಾಗಿ ಮಸೀದಿ ಪರಿಚಯ ಕಾರ್ಯಕ್ರಮ, ಧಾರ್ಮಿಕ ಸೌಹಾರ್ದ ವೇದಿಕೆ, ರಾಜ್ಯದಾದ್ಯಂತ ನಡೆಯುತ್ತಿರುವ ಸಾರ್ವಜನಿಕ ಕುರ್ ಆನ್ ಪ್ರವಚನ ಕಾರ್ಯಕ್ರಮಗಳ ಬಗ್ಗೆ ತೀವ್ರ ಆಸಕ್ತಿಯಿಂದ ತಿಳಿದುಕೊಂಡ ಸ್ವಾಮೀಜಿಯವರು ಜನರನ್ನು ಬೆಸೆಯುವ ಜಮಾಅತ್ ನ ಪರಿಶ್ರಮದ ಬಗ್ಗೆ ಅತೀವ ಹರ್ಷ ವ್ಯಕ್ತಪಡಿಸಿದರು.

ಶಾಂತಿ ಪ್ರಕಾಶನ ಸಾಹಿತ್ಯಗಳ ಓದುಗರಾದ ಸ್ವಾಮೀಜಿಯವರು ಶಾಂತಿ ಪ್ರಕಾಶನದ ಬಗ್ಗೆಯೂ ತಮ್ಮ ಅಭಿಮಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಯವರನ್ನು ಸ್ವಾಮೀಜಿಯವರು ಸನ್ಮಾನಿಸಿದರು.

ನಿಯೋಗದಲ್ಲಿ ಜಮಾಅತ್ ಸ್ಥಾನೀಯ ಅಧ್ಯಕ್ಷ  ಖಲೀಲುರ್ರಹ್ಮಾನ್ ವಸೀಮ್, ವಲಯ ಸಂಚಾಲಕ ಮುನವ್ವರ್ ಪಾಶಾ, ಅಬ್ದುಲ್ ವಾಹಿದ್ ಅಲಿ, ಅಸದುಲ್ಲಾ ಇದ್ದರು.

ಸ್ವಾಮೀಜಿಯವರ ಸಮರ್ಥ ನೇತೃತ್ವದಲ್ಲಿ ಸುತ್ತೂರು ಮಠದ ವತಿಯಿಂದ 350ಕ್ಕಿಂತಲೂ ಅಧಿಕ ವಿದ್ಯಾ ಸಂಸ್ಥೆಗಳು ರಾಜ್ಯ, ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಕಾರ್ಯನಿರ್ವಹಿಸುತ್ತಿದೆ.

SHARE THIS POST VIA

About editor

Check Also

“ನೈತಿಕತೆಯೇ ಸ್ವಾತಂತ್ರ್ಯ” ಪ್ರಬಂಧ ಸ್ಪರ್ಧೆ

ಮಂಗಳೂರು: “ನೈತಿಕತೆಯೇ ಸ್ವಾತಂತ್ರ್ಯ” ಎಂಬ ಕೇಂದ್ರೀಯ ವಿಷಯದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗವು ಸೆಪ್ಟೆಂಬರ್ ತಿಂಗಳ 1 ರಿಂದ …