ವಿಜಯವಾಡ, ಅ.21: ಸ್ವಂತ ಮನೆ, ಹಾಗೂ ಜಮೀನಿಲ್ಲದ, ಬಡತನ ರೇಖೆಗಿಂತ ಕೆಳಗಿರುವ ಮಸೀದಿ ಇಮಾಮರಿಗೆ ಸ್ಥಳವನ್ನು ಒದಗಿಸುವ ಯೋಜನೆಯನ್ನು ಆಂಧ್ರ ಸರಕಾರ ಕೈಗೆತ್ತಿಕೊಂಡಿದೆ ಎಂದು ವರದಿಯಾಗಿದೆ.
ಆಂಧ್ರ ಪ್ರದೇಶ ವಕ್ಫ್ ಬೋರ್ಡಿನ ಅಧೀನದಲ್ಲಿ ಯೋಜನೆಗೆ ರೂಪು ನೀಡಲಾಗಿದ್ದು ಅರ್ಹ ಫಲಾನುಭವಿಗಳು ಸಂಬಂಧಿಸಿದ ವಾರ್ಡ್ ಮೆಂಬರ್ ಅಥವಾ ಪಂಚಾಯತ್ನಿಂದ ದೃಢೀಕರಣ ಪತ್ರ ಪಡೆದು ಅದರೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ಆಂಧ್ರ ವಕ್ಫ್ ಬೋರ್ಡು ಚೀಫ್ ಎಕ್ಸಿಕ್ಯೂಟಿವ್ ಅಧಿಕಾರಿ ಸಯ್ಯಿದ್ ಶಬ್ಬೀರ್ ಭಾಷ ತಿಳಿಸಿದ್ದಾರೆ.
ಆಂಧ್ರ ಪ್ರದೇಶದ ಐದು ಸಾವಿರ ಇಮಾಮರಿಗೆ ಈ ಯೋಜನೆಯ ಲಾಭ ಪಡೆಯುವ ಅವಕಾಶ ಇದೆ. ಚಿಕ್ಕ ವರಮಾನದಿಂದ ಮಸೀದಿಯಲ್ಲಿ ಕೆಲಸ ಮಾಡುತ್ತಿರುವ ಇಮಾಮರಲ್ಲಿ ಹೆಚ್ಚಿನವರಿಗೆ ಮನೆಯಿಲ್ಲ. ಈ ಹಿಂದೆ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿತ್ತು.