Home / ವಾರ್ತೆಗಳು / ಪ್ರವಾದಿ ಇಬ್ರಾಹೀಮ್(ಅ) ಬದುಕಿಗೆ ಸಂಬಂಧಿಸಿದ ಕೃತಿಗಳು ಲಭ್ಯ…

ಪ್ರವಾದಿ ಇಬ್ರಾಹೀಮ್(ಅ) ಬದುಕಿಗೆ ಸಂಬಂಧಿಸಿದ ಕೃತಿಗಳು ಲಭ್ಯ…

ಕ್ರಾಂತಿಕಾರಿ ಸಮಾಜ ಸುಧಾರಕರ ಸದ್ದಡಗಿಸುವ ನಿರಂಕುಶಾವ್ಯವಸ್ಥೆಯ ಪ್ರಯತ್ನವು ಅನಾದಿ ಕಾಲದಿಂದಲೇ ನಡೆದು ಬರುತ್ತಿರುವ ಪಿಡುಗಾಗಿದೆ. ಅಂದು ಕೂಡಾ ಅದೇ ನಡೆದಿತ್ತು.

ಪ್ರವಾದಿ ಇಬ್ರಾಹೀಮ್(ಅ)ರ ಕಾಲದಲ್ಲಿ ನಮ್ರೂದ್ ಎಂಬ ಒಬ್ಬ ಕ್ರೂರ ಸರ್ವಾಧಿಕಾರಿ ಆಡಳಿತ ನಡೆಸುತ್ತಿದ್ದ. ವಿಶೇಷವೇನೆಂದರೆ ಸ್ವತಃ ಇಬ್ರಾಹೀಮರ ತಂದೆಯೇ ಆ ಚಕ್ರಾಧಿಪತಿಯ ಆಸ್ಥಾನದಲ್ಲಿ ಪುರೋಹಿತರಾಗಿ ಸೇವೆ ಮಾಡುತಿದ್ದರು. ಅವರೊಬ್ಬ ಮೂರ್ತಿ ಕೆತ್ತನೆಗಳ ಶಿಲ್ಪಿ; ಮಾತ್ರವಲ್ಲ ಅವುಗಳ ದೈತ್ಯ ವ್ಯಾಪಾರಿಯಾಗಿದ್ದರು.

ಪ್ರವಾದಿ ಇಬ್ರಾಹೀಮರಿಗೆ ಬಾಲ್ಯದಿಂದಲೇ ವ್ಯವಸ್ಥೆಯಲ್ಲಿ ರೂಢಾಮೂಲವಾಗಿರುವ ನಂಬಿಕೆಗಳ ಬಗ್ಗೆ ತಿರಸ್ಕಾರ ಭಾವವಿತ್ತು. “ಆಲಿಸಲಾಗದ, ನೋಡಲಾಗದ ಜಡ ಮೂರ್ತಿಗಳು ಪೂಜಾರ್ಹವಾಗುವುದು ಹೇಗೆ” ? ಎಂಬ ಇಬ್ರಾಹೀಮರ ಸತ್ಯಾನ್ವೇಷಣೆಯ ನಡೆಯು ಮುಂದೆ ಅಲ್ಲಿಯ ವ್ಯವಸ್ಥೆಗೆ ಸವಾಲಾಗಿ ನಿಲ್ಲುತ್ತದೆ.

ಕ್ರಾಂತಿಕಾರಿಯೊಬ್ಬ ತನ್ನ ಜನರ ನಂಬಿಕೆಗಳ ವಿರುದ್ಧವಾಗಿ ಲಗ್ಗೆ ಹಾಕುತ್ತಿದ್ದಾನೆಂದು ಸರ್ವಾಧಿಕಾರಿ ನಮ್ರೂದ್‌ನಿಗೆ ಅರಿವಾಗಿ ಪ್ರವಾದಿ ಇಬ್ರಾಹೀಮ್(ಅ)ರನ್ನು ಸದೆಬಡಿಯುವ ಸಕಲ ಪ್ರಯತ್ನಗಳನ್ನು ಮಾಡುತ್ತಾನೆ . ನಿರಂತರವಾಗಿ ಅವರ ಮೇಲೆ ನಡೆದ ಹಿಂಸಾತ್ಮಕ ದಬ್ಬಾಳಿಕೆಯು ಹತ್ತು-ಹಲವು ರೂಪಗಳಲ್ಲಿ ಮುಂದುವರಿಯುತ್ತದೆ. ಸ್ವತಃ ತಂದೆಯಿಂದ , ಕೊನೆಗೆ ಸಮಾಜದಿಂದಲೇ ಪ್ರವಾದಿ ಇಬ್ರಾಹೀಮ್ ಬಹಿಷ್ಕೃತರಾಗುತ್ತಾರೆ

ಬದುಕಿನುದ್ದಕ್ಕೂ ಬಂದ ಕಷ್ಟಕಾರ್ಪಣ್ಯಗಳ ಮಹಾಪೂರಗಳನ್ನೆಲ್ಲ ಅಪಾರವಾದ ದೇವಭಕ್ತಿ, ತಾಳ್ಮೆ, ಭರವಸೆ, ತ್ಯಾಗ, ಬದ್ಧತೆಯಿಂದ ಎದುರಿಸಿದ ಪ್ರವಾದಿ ಇಬ್ರಾಹೀಮರು ಇತಿಹಾಸದುದ್ದಕ್ಕೂ ಅಜರಾಮರವಾಗಿ ಉಳಿಯುತ್ತಾರೆ. ವೇದಗ್ರಂಥಗಳಾದ ಬೈಬಲ್ , ತೌರಾತ್ (ತೋರಾ) ಮತ್ತು ಪವಿತ್ರ ಕುರ್‌ಆನ್‌ನಲ್ಲಿ ಅವರ ಬದುಕಿನ ಯಶೋಗಾಥೆಯು ಬಹಳ ಗೌರವಾಧಾರಗಳೊಂದಿಗೆ ಉಲ್ಲೇಖಿಸಲ್ಪಟ್ಟಿದೆ. ಜಗತ್ತಿನಲ್ಲಿ ಇಂದಿಗೂ ತಂತಮ್ಮ ಧಾರ್ಮಿಕ ಭಿನ್ನತೆಗಳ ಹೊರತಾಗಿಯೂ ಯಹೂದಿ, ಕ್ರೈಸ್ತ ಮತ್ತು ಮುಸ್ಲಿಮರಿಗೆ ಪ್ರವಾದಿ ಇಬ್ರಾಹೀಮ(ಅಬ್ರಾಹಂ)ರೇ ಪಿತಾಮಹರಾಗಿದ್ದಾರೆ. ಸರ್ವ ಕಾಲದಲ್ಲೂ ಈ ಜನಸಮುದಾಯಗಳಿಗೆ ಅವರೇ ಆದರ್ಶ ನಾಯಕ.

ಓದಿರಿ ……..

ಪ್ರವಾದಿ ಇಬ್ರಾಹೀಮ್(ಅ)
ತ್ಯಾಗೋಜ್ವಲ ಬದುಕು.
ಮುಖಬೆಲೆ : 54-00

• ಪ್ರವಾದಿ ಇಬ್ರಾಹೀಮ್ (ಅ)
ಜೀವನ ಮತ್ತು ಸಂದೇಶ
ಮುಖಬೆಲೆ: 20 -00

• ಪ್ರತಿಗಳಿಗಾಗಿ ಸಂಪರ್ಕಿಸಿರಿ:
7795837394 | 9449333496

SHARE THIS POST VIA

About editor

Check Also

“ನೈತಿಕತೆಯೇ ಸ್ವಾತಂತ್ರ್ಯ” ಪ್ರಬಂಧ ಸ್ಪರ್ಧೆ

ಮಂಗಳೂರು: “ನೈತಿಕತೆಯೇ ಸ್ವಾತಂತ್ರ್ಯ” ಎಂಬ ಕೇಂದ್ರೀಯ ವಿಷಯದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗವು ಸೆಪ್ಟೆಂಬರ್ ತಿಂಗಳ 1 ರಿಂದ …