ಅಬೂ ಝೀಶಾನ್ ಪ್ರಭಾತ ಸಮಯದಲ್ಲಿ ಪ್ರವಾದಿ(ಸ)ರೊಂದಿಗೆ ಕಳೆಯಲು ಎಲ್ಲರೂ ಇಷ್ಟಪಡುತ್ತಿದ್ದರು. ವಿಶೇಷವಾಗಿ ಯುವಕರು. ಪ್ರವಾದಿ(ಸ) ಸಹಾಬಿಗಳೊಂದಿಗೆ ಫಜ್ರ್ ನಮಾಝ್ ಮುಗಿಸಿದ ನಂತರ ಸೂರ್ಯೋದಯದವರೆಗೆ ಮಸೀದಿಯಲ್ಲಿ ಕುಳಿತು ಅಲ್ಲಾಹನ ಆರಾಧನೆಯಲ್ಲಿ ಕಳೆಯುತ್ತಿದ್ದರು. ಸೂರ್ಯೋದಯವಾದಾಗ ಪ್ರವಾದಿ(ಸ) ಎರಡು, ನಾಲ್ಕು, ಆರು ಹಾಗೂ ಕೆಲವೊಮ್ಮೆ ಆರಕ್ಕಿಂತ ಹೆಚ್ಚಾಗಿ ಸುನ್ನತ್ ನಮಾಝ್ಗಳನ್ನು ನಿರ್ವಹಿಸುತ್ತಿದ್ದರು. ಸಹಾಬಿಗಳು ಕೂಡಾ ಪ್ರವಾದಿ(ಸ) ಹಾಗೆಯೇ ಮಸೀದಿಯಲ್ಲಿ ಕುಳಿತು ಅಲ್ಲಾಹನ ಆರಾಧನೆಯಲ್ಲಿ ಕಳೆಯುತ್ತಿದ್ದರು ಹಾಗೂ ಪ್ರವಾದಿ(ಸ) ಇಶ್ರಾಕ್ ನಮಾಝ್ ಮಾಡುವವರೆಗೆ ಕಾಯುತ್ತಿದ್ದರು. ಪ್ರವಾದಿ(ಸ) …
Read More »ಖುತ್ಬಾ ನಿರ್ವಹಿಸುತ್ತಿದ್ದ ಪ್ರವಾದಿ(ಸ) ಇಳಿದು ಬಂದು ಅವರಿಬ್ಬರನ್ನು ಎತ್ತಿಕೊಂಡರು…
ಅಬೂ ಝೀಶಾನ್ ಪ್ರವಾದಿ(ಸ) ಶುಕ್ರವಾರವನ್ನು ವಿಶೇಷ ದಿನವಾಗಿ ಪರಿಗಣಿಸಲು ಕಲಿಸಿದ್ದಾರೆ. ಪ್ರವಾದಿ(ಸ) ಹೇಳಿದರು, “ಅಲ್ಲಾಹನು ಶುಕ್ರವಾರ ಮುಸ್ಲಿಮರಿಗೆ ನೀಡಿದ ಈದ್ನ ದಿನವಾಗಿದೆ. ಹಾಗಾಗಿ ಆ ದಿನವನ್ನು ವಿಶೇಷವಾಗಿ ಪರಿಗಣಿಸಿರಿ.” ಪ್ರವಾದಿ(ಸ) ಶುಕ್ರವಾರದ ದಿನ ಜುಮಾ ನಮಾಝಿಗಾಗಿ ಮಸೀದಿಗೆ ಬರುವಾಗ ಸ್ನಾನ ಮಾಡಿ, ವುಝೂ ಮಾಡಿ ತಮ್ಮಲ್ಲಿದ್ದ ಅತೀ ಉತ್ತಮವಾದ ಸುಗಂಧ ದ್ರವ್ಯವನ್ನು ಹಾಕಿ ಬರುತ್ತಿದ್ದರು. ಹೊಸತಾದ ಸಿವಾಕ್ನಿಂದ ಶುಕ್ರವಾರದ ದಿನ ಹಲ್ಲುಜ್ಜುತ್ತಿದ್ದರು. ಪ್ರವಾದಿ(ಸ) ಎರಡು ಸಂದರ್ಭಗಳಲ್ಲಿ ವಿಶೇಷವಾದ ಬಟ್ಟೆಗಳನ್ನು ಧರಿಸುತ್ತಿದ್ದರು. …
Read More »ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?
ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿದಾಗ ಅವರನ್ನು ದಫನ ಮಾಡುವ ವಿಚಾರದಲ್ಲಿ ತಕರಾರು ನಡೆದಿತ್ತು. ಕೆಲವರು ಅವರನ್ನು ಸುಡುಗಾಡಿನಲ್ಲಿ ಸುಡಬೇಕು ಎಂದೆಲ್ಲಾ ಹೇಳಿದರು. ಹೀಗಿರುವಾಗ ಆತ್ಮಹತ್ಯೆಯ ಬಗ್ಗೆ ಇಸ್ಲಾಮಿನ ದೃಷ್ಟಿಕೋನವೇನು? ಉತ್ತರ: ಮನುಷ್ಯನ ಜೀವನ ಹಾಗೂ ಶರೀರವು ದೈವದತ್ತವಾದುದಾಗಿದೆ. ಅದು ಮನುಷ್ಯನು ಸ್ವತಃ ಗಳಿಸಿದ್ದಲ್ಲ. ಆದ್ದರಿಂದ ಅವೆರಡನ್ನೂ ನಾಶಪಡಿಸುವ ಹಕ್ಕು ಮನುಷ್ಯರಿಗಿಲ್ಲ ಎಂಬುದೇ …
Read More »ಬನ್ನಿ ಮೊದಲು, ಪರಸ್ಪರ ಗೌರವಿಸುವುದನ್ನು ಮುಗುಳ್ನಗುವುದನ್ನು ಕಲಿಯೋಣ..
ಪ್ರಸನ್ನತೆ ಮುಖದ ಸೌಂದರ್ಯವಾಗಿದೆ. ಒಳಿತು ತುಂಬಿ ತುಳುಕುವ ಮನಸ್ಸಿನಿಂದ ಮುಗುಳ್ನಗೆಯು ಹೊರ ಚಿಮ್ಮುವುದು ಮನದ ಒಳಗೆ ತುಂಬಿದ ಬೇಗುದಿಯನ್ನು ಕಿತ್ತೆಸೆದು ಮಾನವ ಸಮಾಜದ ಬೇರುಗಳನ್ನು ಮೊಳಕೆಯೊಡೆಯುವಂತೆ ಮಾಡಿದವರಿಗೆ ಮಾತ್ರ ನಿಷ್ಕಳಂಕರಾಗಿ ಇತರರನ್ನು ಭೇಟಿಯಾಗಲು ಸಾಧ್ಯವಾಗುತ್ತದೆ. ಅಂತಹವರು ಜೀವನದಲ್ಲಿ ಸಂಪೂರ್ಣವಾಗಿ ನಸುನಗುತ್ತಿರುವರು. ಪ್ರವಾದಿವರ್ಯರು(ಸ) ಮುಗುಳ್ನಗೆಯನ್ನು ಮುಸ್ಲಿಮರ ಸಂಕೇತವಾಗಿದೆ ಎಂದಿದ್ದಾರೆ. ನಿಷ್ಕಳಂಕವಾದ ಹೃದಯ (ಕಲ್ಬುನ್ ಸಲೀಮ್) ಎಂದು ಪ್ರವಾದಿ ಇಬ್ರಾಹೀಮರನ್ನು ಕುರ್ಆನ್ ವರ್ಣಿಸಿದೆ. ಮನಸ್ಸಿನ ಶುದ್ಧಿಯು ಪ್ರಶಾಂತತೆಯ, ಮುವಹ್ಹಿದ್ನ ಚಿಹ್ನೆಯಾಗಿದೆ. ಮುಗುಳ್ನಗೆಯ ಮಹತ್ವದ …
Read More »ರಾಜ್ಯಪಾಲ ಸಈದ್ ಬಿನ್ ಅಮೀರ್ರ ವ್ಯಾಪಾರ: ಪತ್ನಿಯ ಉತ್ತರವೇನು?
@ ಶೈಖ್ ಮುಹಮ್ಮದ್ ಕೆ. ಇಸ್ಲಾಮಿನ ದ್ವಿತೀಯ ಖಲೀಫ ಉಮರುಲ್ ಫಾರೂಕ್ರ ಆಡಳಿತ ಕಾಲ. ಸಿರಿಯಾ ದೇಶವು ಅವರ ಕಾಲದಲ್ಲಿಯೇ ಇಸ್ಲಾಮೀ ರಾಷ್ಟ್ರಕ್ಕೆ ಸೇರಿತ್ತು. ಅಂದು ಆ ದೇಶವು ಬಹಳ ಸಂಪನ್ನವಾಗಿತ್ತು. ದೊಡ್ಡ ವಾಣಿಜ್ಯ ಕೇಂದ್ರವಾಗಿತ್ತು. ಅಲ್ಲಿನ ಜೀವನ ಮಟ್ಟವು ತುಲನಾತ್ಮಕವಾಗಿ ಇತರೆಡೆಗಳಿಗಿಂತ ಉತ್ತಮವಾಗಿತ್ತು. ಉಮರುಲ್ ಫಾರೂಕ್ರು, ಅಲ್ಲಿಗೆ ಸಈದ್ ಬಿನ್ ಆಮಿರ್ ಯೋಗ್ಯ ರಾಜ್ಯಪಾಲರಾಗಬಹುದೆಂದು ಭಾವಿಸಿದರು. ಹಾಗೆಯೇ ಅವರನ್ನು ಕರೆಸಿ ಹೀಗೆಂದರು, “ಕೂಡಲೇ ಹೊರಡಿರಿ. ನಿಮ್ಮನ್ನು ಸಿರಿಯಾದ ರಾಜ್ಯ …
Read More »ಶತ್ರು
ಮನುಷ್ಯನಿಗೆ ಶೈತಾನನು ಶತ್ರುವಾಗಿರುವಂತೆಯೇ ಅವನ ದೇಹೇಚ್ಛೆಯೂ ಅವನಿಗೆ ಶತ್ರುವಾಗಿದೆ. ಕುರಾನ್ ಪ್ರಶ್ನಿಸುತ್ತದೆ,”ತನ್ನ ಸ್ವೇಚ್ಛೆಯನ್ನೇ ದೇವನಾಗಿಸಿಕೊಂಡವನನ್ನು ನೋಡಿದಿರಾ?” ಮನುಷ್ಯನು ತಪ್ಪೆಸಗಿ ಶೈತಾನನ ಮೆಲೆ ಆರೋಪಿಸುವುದು ವಾಡಿಕೆ. ನಿಜವಾಗಿ, ನಾವು ಅಲ್ಲಾಹನ ಮಾರ್ಗದಲ್ಲಿ ನೆಲೆಗೊಂಡರೆ ಮಾತ್ರ ಶೈತಾನನು ನಮ್ಮ ಮನಸ್ಸಿಗೆ ವಸ್ವಾಸ್ ಉಂಟು ಮಾಡಲು ಶುರು ಮಾಡುತ್ತಾನೆ. ಇಬ್ರಾಹೀಂ(ಅ)ರು ತನ್ನ ಮಗನನ್ನು ಬಲಿಯರ್ಪಿಸಲು ಮುಂದಾದಾಗ ಶೈತಾನನು ಬಂದು ಇಬ್ರಾಹೀಂ(ಅ)ರಿಗೆ ದುರ್ಬೋಧನೆ ಮಾಡುತ್ತಾನೆ. ಒಬ್ಬನಿಗೆ ಪ್ರಭಾತ ನಮಾಜಿಗೆ ಏಳಲು ಆಗುವುದಿಲ್ಲ; ಕಷ್ಟವಾಗುತ್ತದೆ ಎಂದಾದರೆ ಅದು …
Read More »ಅಸೂಯೆ: ಎಲ್ಲ ಪಾಪಗಳ ಜನನಿ
ಅಸೂಯೆಯು ಮನಸ್ಸಿನ ಅತೀ ದೊಡ್ಡ ರೋಗವಾಗಿದೆ. ಅಸೂಯೆಯು ಎಲ್ಲ ಪಾಪಗಳ ಜನನಿ ಎಂದು ಹೇಳಬಹುದು. ಪ್ರವಾದಿ(ಸ) ಹೇಳಿದರು, “ಅಸೂಯೆಯಿಂದ ದೂರವಿರಿ. ಯಾಕೆಂದರೆ ಬೆಂಕಿಯು ಕಟ್ಟಿಗೆಯನ್ನು ಉರಿಸುವಂತೆ ಅಸೂಯೆಯು ಒಳಿತುಗಳನ್ನು ನುಂಗಿ ಹಾಕುತ್ತದೆ.” ಅಸೂಯೆಯು ಒಂದು ಮರದ ಅತಿ ಕೆಟ್ಟ ಬೀಜವಾಗಿದೆ. ಅಸೂಯೆಯು ಶತ್ರುತ್ವ, ಗೀಬತ್, ಸುಳ್ಳಾರೋಪ, ಸುಳ್ಳು ಹೇಳುವುದು, ಇತರರಿಗೆ ಬೆನ್ನು ತೋರಿಸುವುದು ಮುಂತಾದ ಪಾಪಗಳಿಗೆ ನಾಂದಿಯಾಗುತ್ತದೆ. ಈ ಲೋಕದ ಪ್ರಥಮ ಕೊಲೆಗೆ ಅಸೂಯೆಯು ಕಾರಣವಾಗಿತ್ತು. ಹ. ಯೂಸುಫ್(ಅ)ರನ್ನು ಅವರ …
Read More »ಮುಸ್ಲಿಮರು ಭಾರತಕ್ಕೆ ನಿಷ್ಠರಾಗಿಲ್ಲ. ನಿಜವೇ ?
✍️ ಏ.ಕೆ. ಕುಕ್ಕಿಲ ಕೆಲವು ಆರೋಪಗಳಿವೆ. 1. ಮುಸ್ಲಿಮರು ಭಾರತಕ್ಕೆ ನಿಷ್ಠರಾಗಿಲ್ಲ. 2. ಅವರು ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿಲ್ಲ. 3. ಅವರು ಸೌದಿಯಲ್ಲಿರುವ ಕಾಬಾಕ್ಕೆ ಮುಖ ಮಾಡಿ ನಮಾಝ್ ಮಾಡುತ್ತಾರೆ. 4. ಅವರು ವರ್ಷಂಪ್ರತಿ ಸೌದಿ ಅರೇಬಿಯಾದ ಮಕ್ಕಾಕ್ಕೆ ಹೋಗುತ್ತಾರೆ. 5. ಅವರು ಅರೇಬಿಕ್ ಭಾಷೆಯಲ್ಲಿರುವ ಗ್ರಂಥ ಪಠಿಸುತ್ತಾರೆ… ಇತ್ಯಾದಿ ಇತ್ಯಾದಿ. ಅಂದಹಾಗೆ, ಮುಸ್ಲಿಮರ ಆರಾಧನೆ, ಆಚರಣೆ, ಆಹಾರ ಕ್ರಮ, ಗ್ರಂಥ ಭಾಷೆ, ವಸ್ತ್ರ ವಿನ್ಯಾಸ ಇತ್ಯಾದಿಗಳಿಗೂ ದೇಶನಿಷ್ಠೆಗೂ ಸಂಬಂಧವನ್ನು ಕಲ್ಪಿಸುವ …
Read More »ಆಲಸ್ಯದ ಬಗ್ಗೆ..
ಆಲಸ್ಯ ಎಂಬುದು ಪ್ರಾಯಭೇದಮನ್ಯೆ ಎಲ್ಲರಲ್ಲೂ ಕಾಣುವಂತಹ ದುರ್ಗುಣಗಳಲ್ಲೊಂದು. ಆಲಸ್ಯ ಶೈತಾನನ ಕುತಂತ್ರ ಕೂಡಾ ಹೌದು. ಮನುಷ್ಯನು ದೇವ ಸಾಮೀಪ್ಯ ಗಳಿಸಲು ಬಯಸಿದಾಗೆಲ್ಲಾ ಇಬ್ಲೀಸನು ಸಿದ್ಧಪಡಿಸಿದ ಬಲೆಯಾಗಿದೆ ಎಂದೂ ವ್ಯಾಖ್ಯಾನಿಸಬಹುದು. ಏಕೆಂದರೆ ಪ್ರತಿಯೊಬ್ಬರ ಜೀವನದಲ್ಲೂ ಉದ್ದೇಶ ಮತ್ತು ಕಾರ್ಯಗಳು ಪರಸ್ಪರ ಘರ್ಷಣೆಯಾಗುವ ಸಂದರ್ಭಗಳು ಅನೇಕ ಬಾರಿ ಆವರ್ತಿಸಿರಬಹುದು. ‘ನಾಳೆಯಿಂದ ನಾನು… ಈ ರೀತಿ ಹೆಚ್ಚಿನವರು ನಾಳೆಯಿಂದ… ಎಂದು ಆಲೋಚಿಸುವುದಿದೆ. ಎಲ್ಲವನ್ನೂ ನಾಳೆಯಿಂದ ಬಂಧಿಸುವುದು. ಉದಾಹರಣೆಗೆ .. ನಾಳೆ ಬೆಳಿಗ್ಗಿನ ಪ್ರಾರ್ಥನೆಯಿಂದ… ‘ …
Read More »ಕಅಬಾ ರಕ್ಷಿಸಿದ ಹಕ್ಕಿಗಳು
ಶೈಕ್ ಮುಹಮ್ಮದ್ ಕೆ. `ಕಅಬಾ’ವನ್ನು ತಿಳಿಯದವರು ಯಾರೂ ಇರಲಾರರು. ಅದು ಅರೇಬಿಯಾದ ಮಕ್ಕಾ ನಗರದಲ್ಲಿದೆ. ಜಗತ್ತಿನ ಅತಿ ಪ್ರಸಿದ್ಧ ಆರಾಧನಾಲಯ. ಕೇವಲ ಅಲ್ಲಾಹನ ಆರಾಧನೆಗಾಗಿ ನಿರ್ಮಿಸಲಾಗಿರುವ ಭವನ. ಜಗತ್ತಿನಾದ್ಯಂತವಿರುವ ಮುಸ್ಲಿಮರು ದಿನಾಲೂ ಐದು ಹೊತ್ತು ಕಅಬಾದತ್ತ ಮುಖ ಮಾಡಿ ನಮಾಝ್ ಮಾಡುತ್ತಾರೆ. ಮರಣದ ಬಳಿಕ ಮೃತ ದೇಹವನ್ನು ಗೋರಿಯಲ್ಲಿ ಇರಿಸುವಾಗ ಅದರ ಮುಖವನ್ನು ಕಅಬಾಕ್ಕೆ ಅಭಿಮುಖವಾಗಿ ಇರಿಸುತ್ತಾರೆ. ಸುಮಾರು 4000 ವರ್ಷಗಳ ಹಿಂದೆ ಪ್ರವಾದಿ ಇಬ್ರಾಹೀಮರು ಕಅಬಾ ಪುನರ್ನಿರ್ಮಿಸಿದ್ದರು. ಅವರ …
Read More »